ಶುಕ್ರವಾರ, ಜೂನ್ 26, 2009

ತಪ್ಪು ಮಾಡದ ಪ್ರಾಣಿ

ಅಂದು ಭಾನುವಾರ
ಬೆಳಿಗ್ಗೆ ಸುಮಾರು ಏಳು ಘಂಟೆಯ ಸಮಯ
ಇನ್ನೂ ಹಾಸಿಗೆಯಿಂದ ಎದ್ದಿರದ
ಹಗಲುಗನಸಿನ ಸವಿಯಲ್ಲಿ
ಜಗವ ಮರೆತಿದ್ದೆ
ಹಾಂ! ಕೇಳಿಸಿತು ಒಡನೆ
'ಡಮಾರ್" ಎಂಬ ಸದ್ದು
ಒಡನೆ ಗಾಬರಿಗೊಂಡು ಎದ್ದು ಓಡಿದೆ
ಅಡುಗೆಮನೆಯೆಡೆಗೆ
ಗ್ಯಾಸ್ ಸಿಲಿಂಡರ್ ಏನಾಯಿತೋ ಎಂದು !
ಅಬ್ಬ! ಏನು ಆಗಿರಲಿಲ್ಲ
ಸರಿ, ಹಾಗಿದ್ದರೆ ಸದ್ದೆಲ್ಲಿಯದು?
ಮಲಗುವ ಕೊಠಡಿಯ ಪಕ್ಕದಲ್ಲೇ
ಕೇಳಿತ್ತು ಸದ್ದು
ಆಚೆ ಹೋಗಿನೋಡಲು
ನೆರೆದಿತ್ತು ಅಲ್ಲಿ ಕಾಗೆಗಳ ಗುಂಪು
'ಕಾ ಕಾ ' ಎಂಬ ಬಿಡದ ಕೂಗು
ಬೇಕೆಂದರು ಒಮ್ಮೆಯೂ ಕಾಗೆ ಗುಬ್ಬಿಗಳು
ಕಾಣದ ಬೆಂಗಳೂರಿನ ಬಡಾವಣೆಯಲ್ಲಿ
ಇದ್ದಕ್ಕಿದ್ದಂತೆ ಇಷ್ಟೊಂದು ಕಾಗೆ ಒಟ್ಟಾಗಿ
ಕಂಡು ಬೆರಗಾಗಿ ಕುತೂಹಲದಿಂದ ನೋಡ ಹೋದೆ
ಛೆ! ಹೀಗೆ ಆಗಬಾರದಿತ್ತು !
ಅಲ್ಲಿ ಸತ್ತು ಬಿದ್ದಿತ್ತು ಒಂದು ಕಾಗೆ
ವಿದ್ಯುತ್ ತಂತಿಯ ಸ್ಪರ್ಶದಿಂದ !
ಎಂತಹ ಅಚಾತುರ್ಯ ,
ತಪ್ಪು ಮಾಡದ ಪ್ರಾಣಿಗೆ ಆಗಿತ್ತು ಶಿಕ್ಷೆ !
ಆದರು ಕಾಗೆಗಳ ಸ್ಪಂದನ ಕಂಡು
ಆಯಿತು ಆನಂದ , ಜತೆಗೆ ವ್ಯಥೆ
ನಾವು ಮನುಜರು ಹಾಗಿಲ್ಲವೆಂದು!
ನೆನೆಪಾಗಿತ್ತು ಶಾಲಾ ದಿನಗಳಲ್ಲಿ ಓದಿದ್ದ
ಕವನ ,ಕವಿ ಸಿ.ಪಿ,ಕೆ ಯವರದ್ದು
'ವಿದ್ಯುದಾಲಿಮ್ಗನಕೆ ಸಿಕ್ಕು ಸತ್ತಿದೆ ಕಾಗೆ
ತಪ್ಪು ಮಾಡದ ಪ್ರಾಣಿ ಶಿಕ್ಷೆ ಪಡೆಯುವ ಹಾಗೆ"

4 ಕಾಮೆಂಟ್‌ಗಳು:

bhadra ಹೇಳಿದರು...

ಭಾವಧಾರೆ ಬಹಳ ಚಂದವಿದೆ
ನಿರಂತರವಾಗಿ ಹರಿಯುತಿರಲಿ
ಓದುಗರ ಮನ ತಣಿಸುತಿರಲಿ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

ಸೀತಾರಾಮ. ಕೆ. / SITARAM.K ಹೇಳಿದರು...

channagide

ಗೌತಮ್ ಹೆಗಡೆ ಹೇಳಿದರು...

:)chennagide ri.

ಸೀತಾರಾಮ. ಕೆ. / SITARAM.K ಹೇಳಿದರು...

nice