ಶನಿವಾರ, ಏಪ್ರಿಲ್ 2, 2011

"ಇದು ಯಾರು ಬರೆದ ಕಥೆಯೋ....ನನಗಾಗಿ ಬಂದ ವ್ಯಥೆಯೋ..

ಮಕ್ಕಳ ಮುಂದೆ  ಹೆತ್ತವರು ಕಣ್ಮುಚ್ಚಿಕೊಳ್ಳುವುದು ಸ್ವಾಭಾವಿಕ, ಆದರೆ ಹೆತ್ತವರ ಕಣ್ಮುಂದೆ ಮಕ್ಕಳು ಕಣ್ಮಚ್ಚಿಕೊಂಡರೆ....
"ಭಾವಧಾರೆ"ಯ ಆರಂಭದ ವೇಳೆ ಹೆತ್ತವಳ ನೆನಪಾಗಿ ಬಂದ ಪದಗಳಾಯಿತು "ಅಮ್ಮನಿಗೆ",   ಆದರೆ.......ಅದರ ಹಿಂದೆಯೇ
ಈಗ ಬರೆಯಬೇಕಾಗಿ ಬಂತು...ಮತ್ತೆ ಮತ್ತೆ ಬರೆಯುತ್ತಿರುತ್ತೇನೆ.....  ಹೆತ್ತ ಮಗನ ನೆನಪುಗಳು....ಇದು ಯಾರು ಬರೆದ ಕಥೆಯೋ....ನನಗಾಗಿ ಬಂದ ವ್ಯಥೆಯೋ..........ದೇವರೇ(ಇದ್ದರೆ) ಮುಂದೆ ಯಾರಿಗೂ ಹೀಗಾಗದಿರಲಿ....
ನನ್ನ ಮಗನ ಜನ್ಮ ನಾಮ "ಪ್ರೇರಣ", ವ್ಯವಹಾರ ನಾಮ "ಸತ್ಯಧರ", ನಾವು ಪ್ರೀತಿಯಿಂದ ಕರೆಯುತ್ತಿದ್ದುದು " ಮುದ್ದು", "ಕಂದು", "ಬಂಗಾರ" ಎಂದು. ಅವರ ತಾತ "ಭಟ್ಟ" ಎಂದು, ಗೆಳೆಯರು "ಸತ್ಯು" ಎಂದೂ ಕರೆಯುತ್ತಿದ್ದರು.  ಸತ್ಯಕ್ಕೆ ಸಾವಿಲ್ಲ ಅಂತೆಯೇ "ಸತ್ಯು"ವಿಗೂ ಕೂಡ .   ಇದೋ ಈ ಸಾಲುಗಳು ........ಮರೆಯಾಗಿದ್ದರೂ ನಮ್ಮ ಉಸಿರಿನಲ್ಲಿ ಉಸಿರಾಗಿರುವ, ನನ್ನ ಕೊನೆಯುಸಿರುವವರೆಗೂ ಮನಸಿನಲ್ಲಿ ಹಸಿರಾಗಿರುವ, ದಿನವೂ ಕನಸಿನಲ್ಲಿ ಬಂದು ನನ್ನೊಡನಿರುವ "ನನ್ನ ಕಂದ" ನಿಗಾಗಿ .

"ಸತ್ಯಾವತಾರ ಸತ್ಯಧರ"
"ಮುದ್ದು" "ಕಂದ" ನಾಗಿ ಹುಟ್ಟಿ
"ಪ್ರೇರಣ"ನಾಗಿ ನಮ್ಮ ಬಾಳಿಗೆ
"ಸತ್ಯಧರ" ಎಂಬ ಹೆಸರಿನಿಂದ
ನಮ್ಮ ಬಾಳಿನ "ಬಂಗಾರ" ವಾದೆ

ಆಡಿದೆ ಪಾಡಿದೆ ನಲಿದೆ ಕುಣಿದೆ
ನಲಿಸಿದೆ ಕುಣಿಸಿದ ನಗಿಸಿದೆ ಎಲ್ಲರ
ಜಗವನು ತೋರಿದೆ ಕೃಷ್ಣನ ಹಾಗೆ
ಪ್ರೀತಿಯ "ಸತ್ಯು" ನೀನೆಲ್ಲರಿಗೆ

ಮಗುವು, ಗುರುವು, ಗೆಳೆಯನು ನೀನು
ತಂದೆಯು ನೀನು, ತಾಯಿಯು ನೀನು
ಜನಿಸಿದೆ ಜಗದೋದ್ದಾರಕೆ
ಏನು ಪೊಗಳಲಿ ನಿರ್ಭಾಗ್ಯಳು ನಾನು

ಎಲ್ಲರ ನೋವು ನೀ ಪರಿಹರಿಸಿ
ಎಲ್ಲರ ಮುದ್ದಿನ ಕಣ್ಮಣಿಯಾಗಿ
ಎಲ್ಲರ ಮುಂದೇ ಕಣ್ಮರೆಯಾದೆ
ಎಲ್ಲರ ಮನದಲು ನೀ ನೆಲೆಯಾದೆ

ನೀನಿಲ್ಲದೆ ಬರಿದಾಗಿದೆ ಬಯಲು
ಬಾಳಲಿ ತುಂಬಿದೆ ಬರಿದೇ ಕತ್ತಲು
ಸಂಭವಿಸು ಮತ್ತೆ ಈ ಧರೆಯಲ್ಲಿ
ನಿನ್ನ ಆತ್ಮಕೆ ಶಾಂತಿಯು ಸಿಗಲಿ

"ಅವತಾರ ವರಿಷ್ಠ  ಸತ್ಯಾವತಾರ"
ನಿನ್ನ ಹೆಸರು ಸದಾ ಅಮರ
*****************************

ಕಾಮೆಂಟ್‌ಗಳಿಲ್ಲ: